Sunday, February 7, 2010

ಬುಕ್ ಟಾಕ್

ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ 'ಕಾಡು ಮಾವು' ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ.

ಈ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರೆಹಗಳ ಸಂಕಲನವೇ - ಕಾಡು ಮಾವು.

’ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ’ ಮುನ್ನುಡಿಯಲ್ಲಿ ಶಿವರಾಂ ಪೈಲೂರು. ಪುತ್ತೂರಿನ ಕೊಡೆಂಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ.

(ಫೆ. 6, 2010 - ವಿಜಯಕರ್ನಾಟಕದ 'ಮೀಡಿಯಾ ಮಿರ್ಚಿ ಅಂಕಣದಲ್ಲಿ ಜಿ.ಎನ್.ಮೋಹನ್ ಅವರು ಪುಸ್ತಕದ ಕುರಿತು ಬರೆದ ಒಳ್ಳೆಯ ಮಾತು. ಮೋಹನ್ ಅವರಿಗೆ ಕೃತಜ್ಞತೆಗಳು)

No comments:

Post a Comment