Wednesday, February 2, 2011

ಕೊಡಂಗಾಯಿ ವೆಂಕಟ್ರಮಣ ಮಯ್ಯ ನಿಧನ

ಹಿರಿಯ ವಿದ್ವಾಂಸ, ನಿವೃತ್ತ ಅಧ್ಯಾಪಕ ಕೊಡಂಗಾಯಿ ಪಿ.ವೆಂಕಟ್ರಮಣ ಮಯ್ಯರು (83) ಅಲ್ಪ ಕಾಲದ ಅಸೌಖ್ಯದಿಂದ ಫೆ.1, 2011, ಮಂಗಳವಾರದಂದು ತನ್ನ ಸ್ವಗೃಹ ಕೊಡಂಗಾಯಿ ’ಪ್ರಶಾಂತವನ’ದಲ್ಲಿ ನಿಧನರಾದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಸ್ತಿನ ಸಿಪಾಯಿಯಂತಿದ್ದ ಮಯ್ಯರು ವಿಟ್ಲದ ಕೂಡೂರು ಸನಿಹದ ಅಣಿಲಕಟ್ಟೆ, ಮಂಕುಡೆ, ಕಾಸರಗೋಡುಗಳಲ್ಲಿ ಸೇವೆ ಸಲ್ಲಿಸಿ, ಕೊನೆಯ ಎರಡು ದಶಕಗಳಿಗೂ ಮಿಕ್ಕಿ ಪೈವಳಿಕೆ ಸರಕಾರಿ ಪೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಊರವರ ವಿಶ್ವಾಸ ಗಳಿಸಿದ್ದರು.
ಅಧ್ಯಾಪಕನಾಗಿರುವಾಗಲೇ ಸ್ವಾಧ್ಯಾಯ ನಿರತನಾಗಿ, ಹಿಂದಿ ಪ್ರವೀಣ ಪದವಿ ಗಳಿಸಿದ ಸಾಹಸಿ. ಸಾಮಾಜಿಕ ಹೊಂದಾಣಿಕೆ, ಸರಳ ಜೀವನ, ಮೃದು ಮಧುರ ಮಾತು ಮಯ್ಯರ ಬದುಕಿನ ಯಶಸ್ಸಿನ ಗುಟ್ಟು. ನಿವೃತ್ತಿಯ ಬಳಿಕ ಕೊಡಂಗಾಯಿ ಅಂಚೆ ಕಚೇರಿಯಲ್ಲಿ 'ಬ್ರಾಂಚ್ ಪೋಸ್ಟ್ ಮಾಸ್ಟರ್' ಆಗಿ ಎಂಟು ವರುಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪತ್ನಿ ಶ್ರೀದೇವಿ, ಮೂವರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧುಬಾಂಧವರಲ್ಲದೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಇದೇ ಫೆಬ್ರವರಿ 10ರಂದು ಅವರ 84ನೇ ಹುಟ್ಟುಹಬ್ಬವಾಗಿದ್ದು, ಅಂದೇ ಅವರ ವೈಕುಂಠಯಾತ್ರೆ ಒದಗಿ ಬಂದಿರುವುದು ಕಾಕತಾಳೀಯ, ಯೋಗಾಯೋಗ.