Thursday, July 11, 2013

ಉಪ್ಪಿನಂಗಡಿಯಲ್ಲಿ ಸಂಮಾನ


ಉಪ್ಪಿನಂಗಡಿ ರಾಮನಗರದ ಸೌಹಾರ್ದ ಯಕ್ಷಗಾನ ಸಮಿತಿಯು ನಾ. ಕಾರಂತ ಪೆರಾಜೆಯವರರನ್ನು ಜುಲೈ 6, 2013ರಂದು ಸಂಮಾನಿಸಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣರು ಶಾಲು, ಹಾರ, ಹಣ್ಣುಹಂಪಲು, ಗುಣಕಥನ ಫಲಕ, ಸ್ಮರಣಿಗೆ ನೀಡಿ ಗೌರವಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ದಿ.ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ಹದಿನೈದನೇ ವರುಷದ ಪ್ರಶಸ್ತಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ: ವೇದವ್ಯಾಸ ರಾಮಕುಂಜ ಇವರಿಗೆ ನೀಡಲಾಯಿತು. ಉಪ್ಪಿನಂಗಡಿ ಸ.ಪ.ಪೂ.ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ಗೇರುಕಟ್ಟೆಯವರು ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆ ಮಾಡಿದರು. ರಂಗನಾಥ ರಾವ್ ಬೊಳ್ವಾರು ಗುಣಕಥನ ಫಲಕವನ್ನು ವಾಚಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಶ ಎನ್ ಉಮೇಶ ಶೆಣ್ಯೆ ಉಪಸ್ಥಿತಿ. ಗುಡ್ಡಪ್ಪ ಬಲ್ಯ ನಿರೂಪಿಸಿದರು.