Tuesday, January 26, 2010

ಇಷ್ಟವಾಗುವ 'ಕಾಡು ಮಾವು'

(ಜನವರಿ 21, 2010 ಗುರುವಾರದ ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾದ ’ಪುಸ್ತಕ ಪರಿಚಯ’ ಬರೆಹ)

ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಪ್ಪತ್ತೇಳು ಕೃಷಿ ಸಂಬಂಧಿ ಲೇಖನಗಳನ್ನು ನಾ. ಕಾರಂತ ಪೆರಾಜೆ 'ಕಾಡು ಮಾವು' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬೇಸಾಯ ಲಾಭದಾಯಕವಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಲೆ ಮರೆಯ ಕಾಯಿಗಳಂತೆ ಬೇಸಾಯ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ರೈತರ ಯಶೋಗಾಥೆಗಳನ್ನು ಅವರು ಗುರುತಿಸಿ ದಾಖಲಿಸಿದ್ದಾರೆ.

ಲೇಖಕರಿಗೆ ಕೃಷಿ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಇದೆ. ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರನ್ನು ಗುರುತಿಸಿ ಅವರ ಸಾಹಸ, ಸಾಧನೆಗಳನ್ನು ಇತರರಿಗೆ ಪರಿಚಯಿಸಬೇಕು ಎಂಬ ಆಸಕ್ತಿಯೂ ಇದೆ.


ಜೇನು ಸಾಕಣೆಯಲ್ಲಿ ಯಶಸ್ವಿಯಾದ ಧರ್ಮೇಂದ್ರ ಹೆಗಡೆ, ಹಲಸಿನ ಹಣ್ಣು-ಕಾಯಿಗಳಿಂದ ಹಪ್ಪಳ, ಚಿಪ್ಸ್ ಮತ್ತಿತರ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾದ ಶಿರಸಿಯ ಎರಡು ರೈತಕುಟುಂಬಗಳು, ನೂರಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದ ಮಾಪಲ್ತೋಟದ ಸುಬ್ರಾಯ ಭಟ್, ಸಾವಯವ ಪದ್ದತಿಯಲ್ಲಿ ರಾಜಮುಡಿ ಭತ್ತ ಬೆಳೆದ ಹೊಳೆನರಸಿಪುರ ತಾಲೂಕಿನ ಉಣ್ಣೇನಹಳ್ಳಿಯ ರೈತ ಹೊಯ್ಸಳ ಎಸ್. ಅಪ್ಪಾಜಿ, ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಒಂದೂಕಾಲೆಕರೆಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎನ್.ಆರ್.ಶೆಟ್ಟಿ ದಂಪತಿ.. ಹೀಗೆ ಹಲವಾರು ಯಶಸ್ವಿ ರೈತರ ಬಗ್ಗೆ ಬರೆದ ಲೇಖನಗಳು ನಮ್ಮ ರೈತ ಸಮುದಾಯಕ್ಕೆ ಮಾದರಿ ಆಗಬಲ್ಲವು.


ಈ ಲೇಖನಗಳೆಲ್ಲಾ ಸುಲಭವಾಗಿ ಓದಿಸಿಕೊಳ್ಳುತ್ತವೆ. ಸಾಮಾನ್ಯ ಕನ್ನಡ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಈ ಕಾರಣಕ್ಕೆ 'ಕಾಡು ಮಾವು' ಇಷ್ಟವಾಗುತ್ತದೆ.
- ಪಿ.ಕೆ.

Saturday, January 16, 2010

ಕಾಡುವ ನೆನಪು

ಕೀರ್ತಿಶೇಷ ಕೆರೆಮನೆ ಶಂಭು ಹೆಗಡೆ
ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಯಿಸರು

ಕು.ಕರುಣಾ ಭರತನಾಟ್ಯ ರಂಗಪ್ರವೇಶ


ದಿನಾಂಕ 12-10-2008, ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ
ಪುತ್ತೂರಮೂಲೆ ಮಹಾಬಲ ಭಟ್ಟರ ಪುತ್ರಿ
ಕು.ಕರುಣಾ ಅವರ ಭರತನಾಟ್ಯ ರಂಗಪ್ರವೇಶದ ಸಂದರ್ಭ

ಕಾಲದ ದಾಖಲೆ!

ಭಂಡಿಹೊಳೆ-ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರ ಯಕ್ಷಗಾನ ಸಂಘದ ಸಮಾರಂಭವೊಂದರಲ್ಲಿ -



'ತಳಿ ತಪಸ್ವಿ' ಪುಸ್ತಕದ ಅನಾವರಣ

ದಿನಾಂಕ 28-9-2005ರಂದು
ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ
'ತಳಿ ತಪಸ್ವಿ' ಪುಸ್ತಕದ ಅನಾವರಣ

Tuesday, January 12, 2010

ಮಟ್ಟಿಯವರಿಗೆ ಸಂಮಾನ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ ಇವರ ವತಿಯಿಂದ 11-10-2009ರಂದು ನೀರಬಿದಿರೆಯ ಡಾ.ಗಣೇಶ ಶರ್ಮಾ ಅವರ ಮನೆಯಲ್ಲಿ ಜರುಗಿದ ಸರಣಿ ಶಿವಪೂಜಾ ಸಮಾಪನಾ ಸಮಾರಂಭದಲ್ಲಿ
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರನ್ನು ಸಂಮಾನಿಸಿದಾಗ -
ದಿವ್ಯ ಉಪಸ್ಥಿತಿ : ಪರಮಪೂಜ್ಯ ನಿ.ಪ್ರ.ಸ್ವ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅರಮೇರಿ ಮಠ, ವಿರಾಜಪೇಟೆ

ಸಾಧಕರಿಗೆ ಸಂಮಾನ

ರಾಘವದಾಸ್ ಹೂಹಾಕುವ ಕಲ್ಲು ಇವರ ಯಕ್ಷಗಾನ ವೇಷಭೂಷಣಗಳ ದಶಮಾನ ಸಂಭ್ರಮದಲ್ಲಿ
ಸಾಧಕರಿಗೆ ಸಂಮಾನ (10-2-2008)

ಜಾತಿ ಗೌರವ(!)

ಕೂಟಮಹಾಜಗತ್ತು ಸಾಲಿಗ್ರಾಮ - ಇದರ ವತಿಯಿಂದ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಲ್ಲಿ ಗೌರವ(!) (15-1-2007)

Monday, January 11, 2010

ಹಸಿರು ಮಾತು ಮತ್ತು ಶೇಣಿ ಚಿಂತನ - ಪುಸ್ತಕ ಬಿಡುಗಡೆ



೧. ಅಡಿಕೆ ಪತ್ರಿಕೆ ಪ್ರಕಾಶಕ ಖಂಡಿಗೆ ಶ್ರೀಕೃಷ್ಣ ಭಟ್ಟರು ಕೃಷಿ ಯಶೋಗಾಥೆಗಳ ಸಂಕಲನ 'ಹಸಿರು ಮಾತು' ಪುಸ್ತಕದ ಅನಾವರಣ (2005)
2, ೩. ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನ 'ಶೇಣಿ ಚಿಂತನ' ಕೃತಿಯ ಲೋಕಾರ್ಪಣ - ಉಡುಪಿಯಲ್ಲಿ (2003)

ಪ್ರಶಸ್ತಿ ಸಂಭ್ರಮ



ಪ್ರಶಸ್ತಿಯ ಖುಷಿಯ ಕ್ಷಣ :
(1) ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ - 30-11-2003 (2) 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ - 2003 (3) ಪ.ಗೋ.ಪ್ರಶಸ್ತಿ - 2003 (4) 'ಮುರಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ - 2007

Sunday, January 10, 2010

ಕೆನ್ ಅವರೊಂದಿಗೆ ಕೆಲವು ಕ್ಷಣ..

ಹವಾಯಿಯ ಹಣ್ಣುಕೃಷಿಕ, ಪತ್ರಕರ್ತ ಕೆನ್ ಲವ್ ಕನ್ನಾಡಿಗೆ ಬಂದಾಗ..

ನಲ್ನುಡಿ


ಕಾಡು ಮಾವು ಓದಿದ್ದೇನೆ. 24 ಲೇಖನಗಳೂ ಬಲು ಚಂದ. ಮಾಹಿತಿ, ವಿತರಣೆ, ಜೀವನಪ್ರೀತಿ, ಪರ್ಯಾಯ ಶ್ರೇಷ್ಠತಾದರರಿಗೆ ಒತ್ತು. ಎಲ್ಲದರಲ್ಲೂ ಅಷ್ಟು ರುಚಿಕಟ್ಟು, ಚೊಕ್ಕ. ಲೇಖನಗಳಲ್ಲಿ ಹೇಳಿರುವ ಹಲವು ಖಾದ್ಯಗಳಂತೆ. ಚಿಕ್ಕ ವಾಕ್ಯಗಳು, ನೇರ, ಆದರೂ ಬೋಳು-ಬೋಳು ಅನ್ನಿಸದ ಮೇಲ್ಮಟ್ಟದ ಬರವಣಿಗೆ
- ಡಾ.ಯಂ.ಪ್ರಭಾಕರ ಜೋಶಿ, ಮಂಗಳೂರು (3-11-2009)

'ಕಾಡು ಮಾವು' ಅನಾವರಣ.


ಶಿರಸಿ ಸನಿಹದ ಬೆಂಗಳಿಯಲ್ಲಿ ಜರುಗಿದ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕೋತ್ಸವದಲ್ಲಿ 'ಕಾಡು ಮಾವು' ಪುಸ್ತಕದ ಅನಾವರಣ. (ದಿನಾಂಕ 25-10-2009)