Monday, December 26, 2011

'ಊಟದ ಬಟ್ಟಲಿನಲ್ಲಿ ವಿಷ'

ಉಪ್ಪಿನಂಗಡಿ ಸನಿಹದ ಪಂಜಳ ಡಾ.ವಸಂತ ಕುಮಾರ್ ತಾಳ್ತಜೆ ಅವರ ಮನೆಯಲ್ಲಿ ದಶಂಬರ 18ರಂದು 'ಹೇಮಂತ' ಹಬ್ಬ ಜರುಗಿತು. ಸನಿಹದ ಶಾಲೆಗಳ ಸುಮಾರು ಅರುವತ್ತು ವಿದ್ಯಾರ್ಥಿಗಳಿಗೆ 'ಜೀವಾಯನ' ಕುರಿತ ತರಬೇತಿ-ಕಾರ್ಯಾಗಾರ.

ನಾ. ಕಾರಂತ ಪೆರಾಜೆಯವರಿಂದ 'ಊಟದ ಬಟ್ಟಲಿನಲ್ಲಿ ವಿಷ' ಎಂಬ ವಿಚಾರದ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ.

Tuesday, September 13, 2011

ಬೆಥನಿ ಕೈಕಾರಿಕಾ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸ

ನೆಲ್ಯಾಡಿಯ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 27ರಂದು ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ. ನಾ. ಕಾರಂತ ಪೆರಾಜೆಯಿಂದ ದೀಪಜ್ವಲನದ ಮೂಲಕ ಶುಭಾರಂಭ ಮತ್ತು ಪಾಲಕರಿಗೆ ತರಬೇತಿ. ಉದಯವಾಣಿ ವರದಿಗಾರ ಮತ್ತು ನೆಲ್ಯಾಡಿ ಜೆ.ಸಿ.ಐ.ಯ ಅಧ್ಯಕ್ಷ ಪ್ರಕಾಶ್ ಕೆ.ವೈ.ಉಸ್ತುವಾರಿಕೆ.

ರವೀಂದ್ರನಾಥ ಠಾಗೋರ್ ನೆನಪು

ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳು - ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕವಿ ರವೀಂದ್ರನಾಥ ಠಾಗೋರರ ನೂರೈವತ್ತನೇ ಜನ್ಮ ವರ್ಷಾಚರಣೆಯ ಉದ್ಘಾಟನಾ ಸಮಾರಂಭ. 6 ಆಗಸ್ಟ್ 2011. ಪೂರ್ವಾಹ್ನ ಗಂಟೆ 9-00.

ಉದ್ಘಾಟಕರು : ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ತಾಳ್ತಜೆ ವಸಂತಕುಮಾರರಿಂದ ದೀಪಜ್ವಲನದ ಮೂಲಕ ಉದ್ಘಾಟನೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮುಖ್ಯ ಅತಿಥಿ. ಸಂತ ಜಾರ್ಜ್ ಶಿಕ್ಷಣ ಸಂಸ್ಥೆಯಗಳ ಸಂಚಾಲಕ ಅಬ್ರಹಾಂ ವರ್ಗೀಸರ ಅಧ್ಯಕ್ಷತೆ.

ವಿದ್ಯಾರ್ಥಿಗಳಿಂದ ಠಾಗೋರರ ಕವಿತೆ, ಕಥೆಗಳ ನಿರೂಪಣೆ. ಸಮಗ್ರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದರು. ಉತ್ತಮ ವಾತಾವರಣ. ಶಿಸ್ತುಬದ್ದ ವ್ಯವಸ್ಥೆ.

Tuesday, August 23, 2011

'ಎಡ್ವರ್ಡ್ ರೆಬೆಲ್ಲೋ' ಪುಸ್ತಕ ಅನಾವರಣ

ನಾ. ಕಾರಂತ ಪೆರಾಜೆ ಅವರ 'ಗಿಡಗೆಳೆತನದಿಂದ ಕೃಷಿ ಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ' ಎಂಬ ಕಿರು ಪುಸ್ತಕವನ್ನು ಮೋನಪ್ಪ ಕರ್ಕೇರ ಅವರು ಈಚೆಗೆ ಕೇಪು ಗ್ರಾಮದ ಉಬರು ಮನೆಯಲ್ಲಿ ಜರುಗಿದ ಹಲಸಿನ ಹಬ್ಬದಲ್ಲಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಡಾ.ವಾರಣಾಶಿ ಕೃಷ್ಣಮೂರ್ತಿ, ಭಾರತ ಸರಕಾರದ ಕಾರ್ಯದರ್ಶಿ ವಿ.ವಿ.ಭಟ್ ಉಪಸ್ಥಿತರಿದ್ದರು.
ಧಾರವಾಡ ಕೃಷಿ ಮಾಧ್ಯಮ ಕೇಂದ್ರವು ಪುಸ್ತಿಕೆಯನ್ನು ಪ್ರಕಾಶಿಸಿದೆ.
ಪುಸ್ತಕದ ಬೆಲೆ ೨೦ ರೂಪಾಯಿ. (೦೮೩೬-೨೪೪೪೭೩೬)

Wednesday, July 6, 2011

ಚರಕ ಪ್ರಶಸ್ತಿ - ಮತ್ತೊಮ್ಮೆ!

"ಉದಯವಾಣಿಯಲ್ಲಿ ಪ್ರಕಟವಾದ 'ವಿಷಮಳೆಗೆ ಮುರುಟಿದ ಬದುಕು' ಲೇಖನವು ಈ ಸಾರಿಯ ಚರಕ ಪ್ರಶಸ್ತಿಗೆ ಆಯ್ಕೆಯಾಗಿದೆ," ಬೆಂಗಳೂರಿನ ಕಮ್ಯುನಿಕೇಷನ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯಿಂದ ದೂರವಾಣಿ ಬಂದಾಗ ಆಶ್ಚರ್ಯ ಮತ್ತು ಖುಷಿ. 2003ರಲ್ಲಿ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ 'ಹರಿನೀರ ಥಳಕು ಮನೆಮನೆ ಬೆಳಕು' ಲೇಖನಕ್ಕೆ ಚರಕ ಪ್ರಶಸ್ತಿ ಬಂದಿತ್ತು. ಈಗ ಎರಡನೇ ಇನ್ನಿಂಗ್ಸ್! ಬೆಂಗಳೂರಿನ ರಾಜಭವನದಲ್ಲಿ ಜುಲೈ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ. ಘನತೆವೆತ್ತ ರಾಜ್ಯಪಾಲರಾದ ಶ್ರೀ ಎಚ್.ಆರ್.ಭಾರದ್ವಾಜ್ರಿಂದ ಪ್ರಶಸ್ತಿ ಸ್ವೀಕಾರ. ಪ್ರಥಮ ಬಾರಿಗೆ ರಾಜಭವನನ್ನು ವೀಕ್ಷಿಸಲು ಮತ್ತು ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶಕ್ಕೆ ಪ್ರಶಸ್ತಿಯು ಅನುವು ಮಾಡಿಕೊಟ್ಟಿದ್ದಕ್ಕೆ ಸಿಡಿಎಲ್ ಸಂಸ್ಥೆಗೆ ಆಭಾರಿ.

Monday, June 13, 2011

ಪುಸ್ತಕ ಪುರಸ್ಕಾರ ಪ್ರದಾನ

ಶ್ರೀ ಕ್ಷೇತ್ರ ಹೊರನಾಡಿನ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಷಿಯವರಿಂದ
ಗೌರವ, ಪುಸ್ತಕ ಪುರಸ್ಕಾರ.

Wednesday, February 2, 2011

ಕೊಡಂಗಾಯಿ ವೆಂಕಟ್ರಮಣ ಮಯ್ಯ ನಿಧನ

ಹಿರಿಯ ವಿದ್ವಾಂಸ, ನಿವೃತ್ತ ಅಧ್ಯಾಪಕ ಕೊಡಂಗಾಯಿ ಪಿ.ವೆಂಕಟ್ರಮಣ ಮಯ್ಯರು (83) ಅಲ್ಪ ಕಾಲದ ಅಸೌಖ್ಯದಿಂದ ಫೆ.1, 2011, ಮಂಗಳವಾರದಂದು ತನ್ನ ಸ್ವಗೃಹ ಕೊಡಂಗಾಯಿ ’ಪ್ರಶಾಂತವನ’ದಲ್ಲಿ ನಿಧನರಾದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಸ್ತಿನ ಸಿಪಾಯಿಯಂತಿದ್ದ ಮಯ್ಯರು ವಿಟ್ಲದ ಕೂಡೂರು ಸನಿಹದ ಅಣಿಲಕಟ್ಟೆ, ಮಂಕುಡೆ, ಕಾಸರಗೋಡುಗಳಲ್ಲಿ ಸೇವೆ ಸಲ್ಲಿಸಿ, ಕೊನೆಯ ಎರಡು ದಶಕಗಳಿಗೂ ಮಿಕ್ಕಿ ಪೈವಳಿಕೆ ಸರಕಾರಿ ಪೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಊರವರ ವಿಶ್ವಾಸ ಗಳಿಸಿದ್ದರು.
ಅಧ್ಯಾಪಕನಾಗಿರುವಾಗಲೇ ಸ್ವಾಧ್ಯಾಯ ನಿರತನಾಗಿ, ಹಿಂದಿ ಪ್ರವೀಣ ಪದವಿ ಗಳಿಸಿದ ಸಾಹಸಿ. ಸಾಮಾಜಿಕ ಹೊಂದಾಣಿಕೆ, ಸರಳ ಜೀವನ, ಮೃದು ಮಧುರ ಮಾತು ಮಯ್ಯರ ಬದುಕಿನ ಯಶಸ್ಸಿನ ಗುಟ್ಟು. ನಿವೃತ್ತಿಯ ಬಳಿಕ ಕೊಡಂಗಾಯಿ ಅಂಚೆ ಕಚೇರಿಯಲ್ಲಿ 'ಬ್ರಾಂಚ್ ಪೋಸ್ಟ್ ಮಾಸ್ಟರ್' ಆಗಿ ಎಂಟು ವರುಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪತ್ನಿ ಶ್ರೀದೇವಿ, ಮೂವರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧುಬಾಂಧವರಲ್ಲದೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಇದೇ ಫೆಬ್ರವರಿ 10ರಂದು ಅವರ 84ನೇ ಹುಟ್ಟುಹಬ್ಬವಾಗಿದ್ದು, ಅಂದೇ ಅವರ ವೈಕುಂಠಯಾತ್ರೆ ಒದಗಿ ಬಂದಿರುವುದು ಕಾಕತಾಳೀಯ, ಯೋಗಾಯೋಗ.