Tuesday, September 13, 2011

ರವೀಂದ್ರನಾಥ ಠಾಗೋರ್ ನೆನಪು

ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳು - ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕವಿ ರವೀಂದ್ರನಾಥ ಠಾಗೋರರ ನೂರೈವತ್ತನೇ ಜನ್ಮ ವರ್ಷಾಚರಣೆಯ ಉದ್ಘಾಟನಾ ಸಮಾರಂಭ. 6 ಆಗಸ್ಟ್ 2011. ಪೂರ್ವಾಹ್ನ ಗಂಟೆ 9-00.

ಉದ್ಘಾಟಕರು : ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ತಾಳ್ತಜೆ ವಸಂತಕುಮಾರರಿಂದ ದೀಪಜ್ವಲನದ ಮೂಲಕ ಉದ್ಘಾಟನೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮುಖ್ಯ ಅತಿಥಿ. ಸಂತ ಜಾರ್ಜ್ ಶಿಕ್ಷಣ ಸಂಸ್ಥೆಯಗಳ ಸಂಚಾಲಕ ಅಬ್ರಹಾಂ ವರ್ಗೀಸರ ಅಧ್ಯಕ್ಷತೆ.

ವಿದ್ಯಾರ್ಥಿಗಳಿಂದ ಠಾಗೋರರ ಕವಿತೆ, ಕಥೆಗಳ ನಿರೂಪಣೆ. ಸಮಗ್ರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದರು. ಉತ್ತಮ ವಾತಾವರಣ. ಶಿಸ್ತುಬದ್ದ ವ್ಯವಸ್ಥೆ.

No comments:

Post a Comment