Wednesday, July 6, 2011

ಚರಕ ಪ್ರಶಸ್ತಿ - ಮತ್ತೊಮ್ಮೆ!

"ಉದಯವಾಣಿಯಲ್ಲಿ ಪ್ರಕಟವಾದ 'ವಿಷಮಳೆಗೆ ಮುರುಟಿದ ಬದುಕು' ಲೇಖನವು ಈ ಸಾರಿಯ ಚರಕ ಪ್ರಶಸ್ತಿಗೆ ಆಯ್ಕೆಯಾಗಿದೆ," ಬೆಂಗಳೂರಿನ ಕಮ್ಯುನಿಕೇಷನ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯಿಂದ ದೂರವಾಣಿ ಬಂದಾಗ ಆಶ್ಚರ್ಯ ಮತ್ತು ಖುಷಿ. 2003ರಲ್ಲಿ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ 'ಹರಿನೀರ ಥಳಕು ಮನೆಮನೆ ಬೆಳಕು' ಲೇಖನಕ್ಕೆ ಚರಕ ಪ್ರಶಸ್ತಿ ಬಂದಿತ್ತು. ಈಗ ಎರಡನೇ ಇನ್ನಿಂಗ್ಸ್! ಬೆಂಗಳೂರಿನ ರಾಜಭವನದಲ್ಲಿ ಜುಲೈ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ. ಘನತೆವೆತ್ತ ರಾಜ್ಯಪಾಲರಾದ ಶ್ರೀ ಎಚ್.ಆರ್.ಭಾರದ್ವಾಜ್ರಿಂದ ಪ್ರಶಸ್ತಿ ಸ್ವೀಕಾರ. ಪ್ರಥಮ ಬಾರಿಗೆ ರಾಜಭವನನ್ನು ವೀಕ್ಷಿಸಲು ಮತ್ತು ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶಕ್ಕೆ ಪ್ರಶಸ್ತಿಯು ಅನುವು ಮಾಡಿಕೊಟ್ಟಿದ್ದಕ್ಕೆ ಸಿಡಿಎಲ್ ಸಂಸ್ಥೆಗೆ ಆಭಾರಿ.

No comments:

Post a Comment