Tuesday, June 22, 2010

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ನೀಡುವ 2008ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆಂದು ತಿಳಿಸಲು ಹರ್ಷವಾಗುತ್ತಿದೆ. ಗ್ರಾಮೀಣ ವರದಿಗಾರಿಕೆ ವಿಭಾಗದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಸಾಪ್ತಾಹಿಕದಲ್ಲಿ (17-8-2008) ಪ್ರಕಟವಾದ ನನ್ನ 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಜರಗುವ ಪತ್ರಕರ್ತರ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೊಪ್ಪದ 'ಸಹಕಾರಿ ಸಾರಿಗೆ'ಯು ಒಂದು ಸಂಘಟನಾತ್ಮಕ ಸಂಸ್ಥೆ. ಕಾರ್ಮಿಕರೇ ಇಲ್ಲಿ ಧನಿಗಳು. ಹಳ್ಳಿ ಮತ್ತು ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿದ, ಅನುಭವಿಸಿ ಅನುಭವವಿದ್ದ ಸಹಕಾರಿ ಸಾರಿಗೆಯ ಎಲ್ಲಾ ಸದಸ್ಯರ ಒಗ್ಗಟ್ಟಿನ ಫಲವಾಗಿ ಕೊಪ್ಪದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯಾಗಿ ಸುತ್ತುಮುತ್ತಲ ಹಳ್ಳಿಗಳು ಮತ್ತು ಕೃಷಿ ಅಭಿವೃದ್ದಿಯಾದುವು. ಇದರಿಂದಾಗಿ ಕೃಷಿ ಮತ್ತು ಗ್ರಾಮೀಣ ಬದುಕಿನಲ್ಲಿ ಹೊಸ ಬೆಳಕು ಮೂಡಿದ ತಾಜಾ ಚಿತ್ರಣವನ್ನು 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು ಬೆಳಕು ಚೆಲ್ಲಿತ್ತು.

No comments:

Post a Comment