Friday, November 5, 2010

'ಹಾರಕ' - ಸ್ಪರ್ಧಾ ಬಹುಮಾನ/ಪ್ರಶಸ್ತಿ ಪ್ರದಾನ

ಉದಯವಾಣಿಯಲ್ಲಿ ಪ್ರಕಟವಾದ ನಾ. ಕಾರಂತ ಪೆರಾಜೆ ಅವರ 'ಉಳಿಸಬೇಕಿದೆ, ಈ ಕಿರುಧಾನ್ಯ : ಹಾರಕ' ಬರೆಹಕ್ಕೆ 'ಭಾರತೀಯ ಕಿರುಧಾನ್ಯಗಳ ಜಾಲ'ವು ಪ್ರಾಯೋಜಿಸುವ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. ಇತ್ತೀಚೆಗೆ ಮೂಡಿಗೆರೆ ಸನಿಹದ ದೇವವೃಂದದಲ್ಲಿ ನಡೆದ ಕೃಷಿ ಮಾಧ್ಯಮ ಕೇಂದ್ರದ (ಕಾಮ್) ದಶಮಾನ ಕಾರ್ಯಕ್ರಮದಲ್ಲಿ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಕಮ್ಯೂನಿಟಿ ಮೀಡಿಯಾ ಮೊಲ್ಲಮ್ಮ ಪ್ರಶಸ್ತಿ ಪತ್ರ ಮತ್ತು ಬಹುಮಾನ ಮೊತ್ತ ರೂ.5,000 ನೀಡಿ ಗೌರವಿಸಿದರು. ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ವಟ್ಟೂರಿ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಮ್ ದಶಮಾನ ವೇದಿಕೆಯಲ್ಲಿ ಶ್ರೀ ಪಡ್ರೆ, ವೈ.ಸಿ.ರುದ್ರಪ್ಪ, ಎಸ್.ಎಂ.ಪಾಟೀಲ, ಡಿ.ಬಿ.ಸುಬ್ಬೇಗೌಡ, ಅನಿತಾ ಪೈಲೂರು ಉಪಸ್ಥಿತರಿದ್ದರು.

No comments:

Post a Comment