Friday, November 5, 2010
'ಹಾರಕ' - ಸ್ಪರ್ಧಾ ಬಹುಮಾನ/ಪ್ರಶಸ್ತಿ ಪ್ರದಾನ
Thursday, November 4, 2010
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ 'ರಾಜಕೀಯ ಸರ್ಕಸ್' ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಪ್ರಶಸ್ತಿಯೊಂದಿಗೆ ಸಿಗುವ ಒಂದು ಲಕ್ಷದ ಲಕ್ಷ್ಯ! ಅದಕ್ಕೆ ಪ್ರಶಸ್ತಿ ಉಪಾಧಿ. ಇದಕ್ಕಾಗಿ ಎಂತೆಂತಹ ರಾಜಕೀಯ ಒತ್ತಡ, ವಶೀಲಿ, ಮಧ್ಯವರ್ತಿಗಳು... ಮತ್ತೊಂದೆಡೆ `ಸರಿಯಾಗಿ ತೂಗಿನೋಡಿಯೇ ಅರ್ಹರಿಗೆ ಪ್ರಶಸ್ತಿ ಕೊಟ್ಟಿದ್ದೇವೆ' ಎನ್ನುವ ಮುಖ್ಯಮಂತ್ರಿಗಳು. ಈ ಮಧ್ಯೆ ಕನ್ನಡಪ್ರಭದ ಸಂಪಾದಕರು ಪ್ರಶಸ್ತಿಯನ್ನು ನಿರಾಕರಿಸಿಯೇ ಬಿಟ್ಟರು.
ರಾಜಧಾನಿಯಲ್ಲಿ ಪ್ರಶಸ್ತಿ ಕುರಿತಾದ ಎದ್ದು ಕಾಣುವ ಕೊಳಕುಗಳು. ಇತ್ತ ಜಿಲ್ಲಾ ಪ್ರಶಸ್ತಿಯು ಯಾವುದೆ ಸದ್ದುಗದ್ದಲವಿಲ್ಲದೆ ಹುಡುಕಿ ಬಂದದ್ದು. ಅದೂ 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗಕ್ಕೆ. ಪ್ರತೀ ವರ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತವು 'ಪತ್ರಕರ್ತ ವಿಭಾಗ'ದಲ್ಲಿ ಪ್ರಶಸ್ತಿಯನ್ನು ನೀಡುತ್ತಿತ್ತು. ಈ ಸಲ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಣೆ. ಈ ಪ್ರಶಸ್ತಿಗೆ ನಾನೇ ಬಲಿಯಾಗಬೇಕೇ?!
ಇರಲಿ, ಕೊನೇ ಪಕ್ಷ ಬೇರೇನೂ ಸಿಗದಿದ್ದರೂ (ಕಾಫೀ ವಗೈರೆ..!) ಸರಕಾರದ ಮುದ್ರೆಯುಳ್ಳ 'ಪ್ರಶಸ್ತಿ ಪತ್ರ'ವಾದರೂ ಸಿಕ್ಕಿತಲ್ಲಾ! (ಈ ಪತ್ರವನ್ನಿಟ್ಟುಕೊಂಡು ಏನು ಮಾಡೋದು ಎಂಬುದು ಬೇರೆ ಮಾತು). ಇದೇ ರೀತಿ ಪ್ರಶಸ್ತಿಗಳು ಕನ್ನಾಡಿನಾದ್ಯಂತ ಅರ್ಹರನ್ನು ಅರಸಿಕೊಂಡು ಹೋದರೆ ಚೆನ್ನಾಗಿತ್ತಲ್ವಾ. ಆ ಖುಷಿನೇ ಬೇರೆ. ಸ್ನೇಹಿತರೊಂದಿಗೆ ಹೇಳಿಕೊಳ್ಳಲು ಮಜಾ.
ಇಂತಹ ಮಜಾ, ಖುಷಿಯನ್ನು ’ಪ್ರಶಸ್ತಿ’ಯ ಹಿನ್ನೆಲೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.
Subscribe to:
Posts (Atom)