Thursday, December 27, 2018
ಮೊಂಟೆಪದವು ಲಕ್ಷ್ಮೀ ಪರಮೇಶ್ವರ ಕಾರಂತ ವಿಧಿವಶ
ಬಂಟ್ವಾಳ ತಾಲೂಕಿನ ಮೊಂಟೆಪದವು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ 'ಲಕ್ಷ್ಮೀ ಟೀಚರ್' ಎಂದೇ ಪರಿಚಿತರಾಗಿದ್ದ ಲಕ್ಷ್ಮೀ ಪರಮೇಶ್ವರ ಕಾರಂತ (79) ಇವರು 2018 ದಶಂಬರ 25ರಂದು ವಿಧಿವಶರಾದರು. ಲಿಂಗನಾಥ, ವಾಸುದೇವ, ಶ್ರೀಕುಮಾರ್.. ಮೂವರು ಪುತ್ರರು, ಬಂಧುಗಳನ್ನು ಅಗಲಿದ್ದಾರೆ. ಈಚೆಗೆ ಕೆಲವು ವರುಷಗಳಿಂದ ಪುಣಚ ಸನಿಹದ ಅಜ್ಜಿನಡ್ಕದ 'ಓಂಕಾರಮೂಲೆ'ಯಲ್ಲಿ ವಾಸವಾಗಿದ್ದರು.
ಮೊಂಟೆಪದವು ಶಾಲೆಯಲ್ಲಿ ಪತಿ ಪರಮೇಶ್ವರ ಕಾರಂತರೊಂದಿಗೆ ಗ್ರಾಮೀಣ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಈ ದಂಪತಿಗಳದ್ದು. ಜಾತಿ, ಮತ, ಬೇಧವಿಲ್ಲದೆ ಸಾಮಾನವಾಗಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸಂಸ್ಕಾರ ಪಥದಲ್ಲಿ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿದ್ದರು. ಇವರಿಗೆ ಶಾಲೆಯೂ, ಮನೆಯೂ ಒಂದೇ ಆಗಿತ್ತು. ವ್ಯಾಪಕವಾದ ಸಾರ್ವಜನಿಕ ಸಂಪರ್ಕವಿತ್ತು. ರಜೆ, ಗಂಟೆ, ವೈಯಕ್ತಿಕವಾದ ಸುಖ-ದುಃಖಗಳನ್ನು ನೋಡದ ದುಡಿತ.
ಲಕ್ಷ್ಮೀ ಕಾರಂತರಿಗೆ ಸಾಹಿತ್ಯ ಅಸಕ್ತಿ ಆಪಾರ. ಕವನ, ಹಾಡುಗಳನ್ನು ಬರೆಯುವುದು ಹವ್ಯಾಸ. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಹುರಿದುಂಬಿಸುತ್ತಿದ್ದರು. ಶಾಲಾ ವಾರ್ಶಿಕೋತ್ಸವಗಳ ಸಂದರ್ಭಗಳಲ್ಲಿ ಪ್ರತಿ ವರುಷ ಹೊಸತನ್ನು ಅಳವಡಿಸಿಕೊಂಡು ಜನಾನುರಾಗಿಯಾಗಿದ್ದರು. 'ಶಾಲೆಯ ಅಧ್ಯಾಪಕ ಒಂದು ಊರಿನ ಕಣ್ಣುಗಳಿದ್ದಂತೆ' ಎನ್ನುವ ಹಿರಿ ಮಾತನ್ನು ಅನುಷ್ಠಾನಿಸಿದ ನೆಗಳ್ತೆ ಇವರದು.
ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಲ್ಲಿ ವಿಶೇಷಾಸಕ್ತಿ. ಅತಿಥಿಯ ಹೊಟ್ಟೆ ತುಂಬಿದಾಗ ಖುಷಿ ಪಡುವ ಗೃಹಿಣಿ. 2012ರಲ್ಲಿ ಪರಮೇಶ್ವರ ಕಾರಂತರು ವಿಧಿವಶರಾಗಿದ್ದರು. ಆ ಬಳಿಕ ಲಕ್ಷ್ಮೀ ಕಾರಂತರ ದೈಹಿಕವಾಗಿ ಕುಸಿದಿದ್ದರು. ಕಳೆದ ಆರು ವರುಷಗಳಲ್ಲಿ ಸಕ್ರಿಯತೆ ಕೈಕೊಟ್ಟಿತ್ತು.
ಇವರು ನನ್ನ ಚಿಕ್ಕಮ್ಮ – 1982ನೇ ಇಸವಿ. ಎಸ್.ಎಸ್.ಎಲ್.ಸಿ.ಫೈಲ್ ಆಗಿ ಅಸಹಾಯಕ ಸ್ಥಿತಿಯಲ್ಲಿದ್ದೆ. ಸುಳ್ಯದ ಚೇತನಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಒಂದೆರಡು ವರುಷ ದುಡಿತ. ಅರಂಬೂರಿನ ರಬ್ಬರ್ ಫ್ಯಾಕ್ಟರಿನಲ್ಲಿ ಅಲ್ಪ ಕಾಲ ರಾತ್ರಿ ಪಾಳಿ ಕೆಲಸ. ಮನಸ್ಥಿತಿಗಳಿಗೆ ಎರಡೂ ಉದ್ಯೋಗಗಳು ಒಗ್ಗದಾದಾಗ ನನ್ನನ್ನು ಆದರಿಸಿದವರು ಚಿಕ್ಕಪ್ಪ-ಚಿಕ್ಕಮ್ಮ. ಆರಂಭದಲ್ಲಿ ಮುಳಿಯ ಶಂಕರ ಭಟ್ಟರ ಮೂಲಕ ‘ಜಗದರ್ಶಿ’ ಎನ್ನುವ ಪತ್ರಿಕೆಯಲ್ಲಿ ಸ್ವಲ್ಪ ಕಾಲ ಕಂಪೋಸಿಟರ್ ಉದ್ಯೋಗ. ನಂತರ ಎಡಂಬಳೆ ಗೋಪಾಲ ಭಟ್ಟರ ಮೂಲಕ ಮಂಗಳೂರಿನ ನ್ಯಾಯವಾದಿ ಎ.ಪಿ.ಗೌರೀಶಂಕರರು ಕಾರ್ಯದರ್ಶಿಯಾಗಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಕ್ಕೆ ಸಹಾಯಕನಾಗಿ ಸೇರ್ಪಡೆ. ಆಗಿನ ಸಂಬಳ ರೂ.300.
ಚಿಕ್ಕಪ್ಪ ವಾಸವಾಗಿದ್ದ ಮೊಂಟೆಪದವು ಮನೆಯಿಂದ ಹೋಗಿ ಬರುತ್ತಿದ್ದೆ. ತನ್ನ ಮಕ್ಕಳನ್ನುಯಾವ ರೀತಿ ನೋಡಿಕೊಳ್ಳುತ್ತಿದ್ದರೋ ಅಷ್ಟೇ ಪ್ರೀತಿಯಿಂದ ನನ್ನನ್ನೂ ನೋಡಿಕೊಳ್ಳುತ್ತಿದ್ದರು. ಬಹುಶಃ ಮೂರು ವರುಷ ಚಿಕ್ಕಪ್ಪ-ಚಿಕ್ಕಮ್ಮ ಕೈತುತ್ತು ನೀಡಿ ಪ್ರೀತಿ ತೋರಿದ್ದರು. ನಂತರದ ದಿವಸಗಳಲ್ಲಿ ತಲಪಾಡಿಯ ಅಜ್ಜಿ ಮನೆಯಿಂದ ಎಡರನೇ ಇನ್ನಿಂಗ್ಸ್ ಆರಂಭ. 1991 ಜನವರಿ 1 ರಿಂದ ಪುತ್ತೂರು ಅಡಿಕೆ ಪತ್ರಿಕೆಯಲ್ಲಿ ಕಚೇರಿ ಸಹಾಯಕನಾಗಿ ನಿಯುಕ್ತಿ. ಮಂಗಳೂರಿಗೆ ವಿದಾಯ.
ನನ್ನೆಲ್ಲಾ ಸಾಹಿತ್ಯ, ಕಲೆಯ ಆಸಕ್ತಿಗಳನ್ನು ಪ್ರೋತ್ಸಾಹದ ನುಡಿಗಳ ಮೂಲಕ ಬೆನ್ನುತಟ್ಟುತ್ತಾ ಬಂದಿದ್ದಾರೆ ಚಿಕ್ಕಪ್ಪ-ಚಿಕ್ಕಮ್ಮ. ನನ್ನ ಮದುವೆಯ ಸಂದರ್ಭದಲ್ಲಿ ಬಂಧುಗಳಿಂದ ಉಂಟಾದ ‘ಮಾನಸಿಕ ಕಿರಿಕಿರಿ’ಗಳನ್ನು ಹಗುರ ಮಾಡಿದವರು. ‘ತನ್ನ ಅಣ್ಣನ ಮಗ’ ಎನ್ನುವ ಹೊಕ್ಕಳ ಬಳ್ಳಿಯ ಸಂಬಂಧಗಳು ಚಿಕ್ಕಪ್ಪನಲ್ಲಿ ಸದಾ ಜೀವಂತವಾಗಿರುವುದನ್ನು ಕಂಡಿದ್ದೆನೆ. ‘ನನ್ನ ಭಾವನ ಮಗ’ ಎನ್ನುವ ಅಕ್ಕರೆ ಚಿಕ್ಕಮ್ಮನಲ್ಲೂ ಇತ್ತು. ಅವರ ಮಕ್ಕಳಾದ ಲಿಂಗನಾಥ, ವಾಸುದೇವ, ಶ್ರೀ ಕುಮಾರ್ ತನ್ನನ್ನು ಅನ್ಯನೆಂದು ಇಂದಿಗೂ ಭಾವಿಸದಿರುವುದು ನನ್ನ ಸುಕೃತ.
1996ರಲ್ಲಿ ಅಪ್ಪನನ್ನು ಕಳೆದುಕೊಂಡೆ. 2012ರಲ್ಲಿ ಚಿಕ್ಕಪ್ಪ ದೂರವಾದರು. 2018ರಲ್ಲಿ ಚಿಕ್ಕಮ್ಮ ದೈವಾಧೀನರಾದರು. ನನ್ನ ಬದುಕಿನಲ್ಲಿ ಪಥದರ್ಶಕರ ಕೊರತೆಯಿಂದಾಗಿ ಆರಕ್ಕೇರದ ಮೂರಕ್ಕಿಳಿಯದ ಒಂದು ರೀತಿಯ ಅತಂತ್ರ ಬದುಕಿನಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ. ಸಾಗಿದ ಬಂದ ದಾರಿಯಲ್ಲಿ ಆರ್ಥಿಕತೆಯ ವೈಭವಗಳಿಲ್ಲ. ಆದರೆ ಕಲೆ, ಸಾಹಿತ್ಯಗಳು ಕೈ ಬಿಡಲಿಲ್ಲ.
Tuesday, October 27, 2015
ಯೂಸ್ ಅಂಡ್ ಥ್ರೋ.....!
ಬದುಕಿನ ಎಷ್ಟೋ ಕ್ಷಣಗಳಲ್ಲಿ ಆಪ್ತರಿಂದ, ಸ್ನೇಹಿತರಿಂದ, ಬಂಧುಗಳಿಂದ 'ಯೂಸ್ ಅಂಡ್ ಥ್ರೋ' ಅನುಭವ ಬಹುತೇಕರಿಗೆ ಆಗಿರುತ್ತದೆ. ಈ ಅನುಭವ ಮೌನವಾಗುವುದೇ ಹೆಚ್ಚು. ಮಾತಾಗುವುದಿಲ್ಲ. 'ಮಾತಾಗಬೇಕಾದರೆ ಆರ್ಥಿಕ ಸಬಲತೆ ಬೇಕು. ಅಂತಸ್ತು ಬೇಕು' ಮಾತಿನ ಮಧ್ಯೆ ಒಬ್ಬರು ಹೇಳಿದ ಮಾತು ಸತ್ಯವೆಂದು ತೋರುತ್ತದೆ.
ಸುಮಾರು ಮೂವತ್ತು ವರುಷಗಳ ಸಾಹಿತ್ಯ, ಯಕ್ಷಗಾನ ಬದುಕಿನಲ್ಲಿ ಇಂತಹ ಅನುಭವ ಸಾಕಷ್ಟು ಆಗಿದೆ. ಯೂಸ್ ಮಾಡಿಕೊಳ್ಳುವಾಗ ಅವರು ಮುಂದೆ ಥ್ರೋ ಮಾಡಿಯಾರು ಎನ್ನುವ ಕಲ್ಪನೆ ಮನದ ಮೂಲೆಯಲ್ಲಿದ್ದರೂ 'ಛೇ... ಹೀಗಾಯಿತಲ್ಲಾ' ಅಂತ ಬೇಸರವಾಗುತ್ತದೆ. ಯೂಸ್ ಮಾಡಿಕೊಳ್ಳುವಾಗ ಹೊಗಳಿಕೆಯ ಹೊನ್ನಶೂಲ. ಆತ ಪ್ರಯೋಜನವಿಲ್ಲ ಎಂದಾದರೆ ಹಗುರ, ಗೇಲಿ ಮಾತುಗಳಿಂದ 'ಥ್ರೋ' ಮಾಡಿಬಿಡುತ್ತಾರೆ.
ಯೂಸ್ ಮಾಡಿಕೊಳ್ಳುವಾಗ ನಾನು ಹಲವು ಬಾರಿ ಯೋಚಿಸಿದ್ದಿದೆ - 'ಕಷ್ಟ ಕಾಲಕ್ಕೆ ಇವರು ನೆರವಾಗಬಹುದು. ಮುಂದೆ ಎಂದಾದರೂ ಇವರು ಸಹಾಯಕರಾದಾರು'. ಅದೆಲ್ಲಾ ಸುಮ್ಮನೆ...! ಅಲ್ಲೋ ಇಲ್ಲೋ ಸಹೃದಯತೆ ಮತ್ತು ಸಹೃದಯರು ಇರಬಹುದೇನೋ!
ಈಚೆಗೆ ಶುಭ ಸಮಾರಂಭವೊಂದರಲ್ಲಿ ಪರಿಚಿತರೊಬ್ಬರು ಮಾತಿಗೆ ಸಿಕ್ಕರು. ಅವರು ಮಾತನಾಡುತ್ತಾ, "ಈಗಿನ ಕಾಲದಲ್ಲಿ ಸ್ಟೇಟಸ್ ಬೇಕು. ಅದಿಲ್ಲದಿದ್ದರೆ ಯಾರೂ ಹತ್ತಿರ ಮಾಡಿಕೊಳ್ಳುವುದಿಲ್ಲ. ಬೆರಳಿಗೆ ಉಂಗುರ, ಪ್ರಯಾಣಿಸಲು ಕಾರು, ದೊಡ್ಡ ದೊಡ್ಡ ಮನೆ, ಜಾಗ...ಇದೆಲ್ಲಾ ಬೇಕು. ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಪ್ರಯೋಜನವಿಲ್ಲ." ಎಂದಿದ್ದರು.
ಇವರ ಮಾತನ್ನು ಒಪ್ಪಬೇಕಾಗಿಲ್ಲ. ಆದರೆ ಸಮಾಜವನ್ನು ನೋಡುವಾಗ ಹೌದೆಂದು ಅನ್ನಿಸುತ್ತದೆ. ನನ್ನಲ್ಲಿ, "ಉಂಗುರುವಿಲ್ಲ, ವಾಹನವಿಲ್ಲ, ಸ್ವಂತದ್ದಾದ ಮನೆಯಿಲ್ಲ. ಇನ್ನೂ 'ಸೆಟ್ಲ್' ಆಗಿಲ್ಲ." ಹಾಗಾಗಿಯೇ ಇರಬೇಕು - ಯೂಸ್ ಅಂಡ್ ಥ್ರೋ.... ಕಾಡುವುದು.
ಸುಮಾರು ಮೂವತ್ತು ವರುಷಗಳ ಸಾಹಿತ್ಯ, ಯಕ್ಷಗಾನ ಬದುಕಿನಲ್ಲಿ ಇಂತಹ ಅನುಭವ ಸಾಕಷ್ಟು ಆಗಿದೆ. ಯೂಸ್ ಮಾಡಿಕೊಳ್ಳುವಾಗ ಅವರು ಮುಂದೆ ಥ್ರೋ ಮಾಡಿಯಾರು ಎನ್ನುವ ಕಲ್ಪನೆ ಮನದ ಮೂಲೆಯಲ್ಲಿದ್ದರೂ 'ಛೇ... ಹೀಗಾಯಿತಲ್ಲಾ' ಅಂತ ಬೇಸರವಾಗುತ್ತದೆ. ಯೂಸ್ ಮಾಡಿಕೊಳ್ಳುವಾಗ ಹೊಗಳಿಕೆಯ ಹೊನ್ನಶೂಲ. ಆತ ಪ್ರಯೋಜನವಿಲ್ಲ ಎಂದಾದರೆ ಹಗುರ, ಗೇಲಿ ಮಾತುಗಳಿಂದ 'ಥ್ರೋ' ಮಾಡಿಬಿಡುತ್ತಾರೆ.
ಯೂಸ್ ಮಾಡಿಕೊಳ್ಳುವಾಗ ನಾನು ಹಲವು ಬಾರಿ ಯೋಚಿಸಿದ್ದಿದೆ - 'ಕಷ್ಟ ಕಾಲಕ್ಕೆ ಇವರು ನೆರವಾಗಬಹುದು. ಮುಂದೆ ಎಂದಾದರೂ ಇವರು ಸಹಾಯಕರಾದಾರು'. ಅದೆಲ್ಲಾ ಸುಮ್ಮನೆ...! ಅಲ್ಲೋ ಇಲ್ಲೋ ಸಹೃದಯತೆ ಮತ್ತು ಸಹೃದಯರು ಇರಬಹುದೇನೋ!
ಈಚೆಗೆ ಶುಭ ಸಮಾರಂಭವೊಂದರಲ್ಲಿ ಪರಿಚಿತರೊಬ್ಬರು ಮಾತಿಗೆ ಸಿಕ್ಕರು. ಅವರು ಮಾತನಾಡುತ್ತಾ, "ಈಗಿನ ಕಾಲದಲ್ಲಿ ಸ್ಟೇಟಸ್ ಬೇಕು. ಅದಿಲ್ಲದಿದ್ದರೆ ಯಾರೂ ಹತ್ತಿರ ಮಾಡಿಕೊಳ್ಳುವುದಿಲ್ಲ. ಬೆರಳಿಗೆ ಉಂಗುರ, ಪ್ರಯಾಣಿಸಲು ಕಾರು, ದೊಡ್ಡ ದೊಡ್ಡ ಮನೆ, ಜಾಗ...ಇದೆಲ್ಲಾ ಬೇಕು. ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಪ್ರಯೋಜನವಿಲ್ಲ." ಎಂದಿದ್ದರು.
ಇವರ ಮಾತನ್ನು ಒಪ್ಪಬೇಕಾಗಿಲ್ಲ. ಆದರೆ ಸಮಾಜವನ್ನು ನೋಡುವಾಗ ಹೌದೆಂದು ಅನ್ನಿಸುತ್ತದೆ. ನನ್ನಲ್ಲಿ, "ಉಂಗುರುವಿಲ್ಲ, ವಾಹನವಿಲ್ಲ, ಸ್ವಂತದ್ದಾದ ಮನೆಯಿಲ್ಲ. ಇನ್ನೂ 'ಸೆಟ್ಲ್' ಆಗಿಲ್ಲ." ಹಾಗಾಗಿಯೇ ಇರಬೇಕು - ಯೂಸ್ ಅಂಡ್ ಥ್ರೋ.... ಕಾಡುವುದು.
Sunday, September 6, 2015
ಪುತ್ತೂರಿನಲ್ಲಿ ಕೃಷ್ಣಾಷ್ಟಮಿ
ಪುತ್ತೂರು ಪುರಭವನದಲ್ಲಿ ಸೆಪ್ಟೆಂಬರ್ 5, ಅಪರಾಹ್ನ ಗಂಟೆ 3 ಕ್ಕೆ ಕೃಷ್ಣ ಜನ್ಮಾಷ್ಟಮಿ ಆಚರಣೆ. ಸರಕಾರಿ ಯೋಜಿತ ಕಾರ್ಯಕ್ರಮ. ಪುತ್ತೂರಿನ ಶಾಸಕಿ ಶ್ರೀಮತಿ ಶಕುಂತಾಲಾ ಟಿ. ಶೆಟ್ಟಿಯವರ ಅಧ್ಯಕ್ಷತೆ. ಸಹಾಯಕ ಕಮಿಷನರ್ ಶ್ರೀ ಬಸವರಾಜ್ ಇವರಿಂದ ಉದ್ಘಾಟನೆ. ನಾ. ಕಾರಂತ ಪೆರಾಜೆಯವರಿಂದ ಕೃಷ್ಣ ಸಂದೇಶ. ತಾ.ಪಂ.ಅಧ್ಯಕ್ಷ ಪುಲಸ್ತ್ಯಾರೈ, ನಗರಸಭಾ ಪೌರಾಯುಕ್ತ ರೇಖಾ ಜೆ. ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ತಹಶೀಲ್ದಾರ್ ಸಣ್ಣರಂಗಯ್ಯ.... ಮೊದಲಾದವರ ಉಪಸ್ಥಿತಿ.
Wednesday, June 3, 2015
ಖುಷಿ ನೀಡಿದ ತಾಳಮದ್ದಳೆ
ಮೇ 27ರಂದು ಅಪರಾಹ್ನ ಗಂಟೆ 3. ಪುತ್ತೂರು ಹಾರಾಡಿ ಶ್ಯಾಮ ಭಟ್ಟರ ಗೃಹಪ್ರವೇಶ. ಬಡೆಕ್ಕಿಲ ಗಣರಾಜ ಇವರ ಆಯೋಜನೆಯಲ್ಲಿ ತಾಳಮದ್ದಳೆ. ಪ್ರಸಂಗ : ದಕ್ಷಾಧ್ವರ. ಸುಮಾರು 3 ಗಂಟೆಯಿಂದ 7-30ರ ತನಕ ತಾಳಮದ್ದಳೆಯ ವೈಭವ.
ಪದ್ಯಾಣ ಗಣಪತಿ ಭಟ್ ಮತ್ತು ತೆಂಕಬೈಲು ತಿರುಮಲೇಶ್ವರ ಭಟ್ಟರ ದ್ವಂದ್ವ ಹಾಡುಗಾರಿಕೆ ಕೂಟದ ಹೈಲೈಟ್. ಇಬ್ಬರೂ ಸುಶ್ರಾವ್ಯವಾಗಿ ಹಾಡಿ ಪ್ರಸಂಗವನ್ನು ಉತ್ತುಂಗ ಶಿಖರಕ್ಕೇರಿಸಿದ್ದರು. ಚೈತನ್ಯ ಪದ್ಯಾಣರ ಮದ್ದಳೆ. ರವಿ ಭಟ್ ಚೆಂಡೆ.
ಅರ್ಥಧಾರಿಗಳಾಗಿ - ಉಜಿರೆ ಅಶೋಕ ಭಟ್ (ಈಶ್ವರ), ನಾ. ಕಾರಂತ ಪೆರಾಜೆ (ದಾಕ್ಷಾಯಿಣಿ), ಪಕಳಕುಂಜ ಶ್ಯಾಮ ಭಟ್ (ದಕ್ಷ), ಭಾಸ್ಕರ ಬಾರ್ಯ (ದೇವೇಂದ್ರ), ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡಂಗಾಯಿ (ಬ್ರಾಹ್ಮಣರು), ಬಡೆಕ್ಕಿಲ ಗಣರಾಜ ಭಟ್ (ವೀರಭದ್ರ).
ತುಂಬಾ ತೃಪ್ತಿ ನೀಡಿದ ತಾಳಮದ್ದಳೆ. ಸುಮೂರು ನೂರಕ್ಕೂ ಮಿಕ್ಕಿ ಪ್ರೇಕ್ಷಕರು ಕೂಟವನ್ನು ಆಸ್ವಾದಿಸಿದ್ದರು. ಅಶೋಕ ಭಟ್ಟರ ಮಾತಿನ ವೈಖರಿ. ಎದುರು ಪಾತ್ರವನ್ನು ಮಾತಿಗೆಳೆಯುವ ತಂತ್ರ ಅನನ್ಯ. ಅವರೊಂದಿಗೆ ಮೊದಲು ಪಾತ್ರಗಳನ್ನು ಮಾಡಿದ ಅನುಭವವಿದ್ದುರಿಂದ ಕೂಟದ ಅರ್ಥಗಾರಿಕೆ ಕಷ್ಟವಗಿಲ್ಲ. ಲೌಕಿಕ, ತಿಳಿ ಹಾಸ್ಯದೊಂದಿಗೆ ಪ್ರಸಂಗ ಚೆನ್ನಾಗಿ ಮೂಡಿಬಂತು.
ಅರ್ಥವಾಗದ ಬದುಕು....
ಬದುಕು ಅರ್ಥವಾಗುವುದಿಲ್ಲ.....!
ಅರ್ಥವಾಗಬಾರದು ಬಿಡಿ.....
ಭರವಸೆಯ ಬೆಳಕಿನ
ನಂದಾದೀಪದ ಎಣ್ಣೆ
ಆರುವ ವೇಗ ಎಷ್ಟೊಂದು ಕ್ಷಿಪ್ರ...
ಅರ್ಥವಾಗಬಾರದು ಬಿಡಿ.....
ಭರವಸೆಯ ಬೆಳಕಿನ
ನಂದಾದೀಪದ ಎಣ್ಣೆ
ಆರುವ ವೇಗ ಎಷ್ಟೊಂದು ಕ್ಷಿಪ್ರ...
ಬತ್ತಿ ಕರಟಿದಾಗಲೇ ಗೊತ್ತು...
ಎಣ್ಣೆ ಆರಿದೆ.....
ಮೊದಲೇ ಗೊತ್ತಾಗುತ್ತಿದ್ದರೆ ಎಣ್ಣೆ ಹಾಕುತ್ತಿದ್ದೆ....
ಈ ಗೊತ್ತಾಗದಿರುವುದೇ..... ಬದುಕು...
ಅಬ್ಬಾ..... ಅದರ ತಾಕತ್ತೇ.....!?
ಆರುವ ಮೊದಲು ಪ್ರಕಾಶದ ಪ್ರಭೆ
ಕತ್ತಲು ಸರಿದ ಅನುಭವ
ರಾಚುವ ಖುಷಿಗಳ ಮಾಲೆ
ಸಾಧಿಸಿದ ಗತ್ತು-ಗೈರತ್ತು....
ಬೀರಿದ ಪ್ರಭೆಗೆ ಮೊಗೆಮೊಗೆವ ರಿಂಗಣ
ರಿಂಗಿಸಿದಷ್ಟೂ ಬಾಚಿಕೊಳ್ಳುವ ಅವಕಾಶಗಳು
ಕರಬುವಷ್ಟು... ಗೊಣಗಾಡುವಷ್ಟು... ಹೊಟ್ಟೆಯೊಳಗಿನ ಹುಳ ಸಾಯುವಷ್ಟು..
ವಕ್ರನೋಟಿಗಳಿಗಿದು ಕೊನೆಯ ಅಸ್ತ್ರ
ಪ್ರಭೆಯಾರುವ ಮುನ್ನ ಸುತ್ತುವ ದುಂಬಿಗಳು
ಪ್ರಭೆಯ ಸ್ನೇಹ ಪಡೆದ ಹಪಾಹಪಿ
ಅಂತರ ಹೆಚ್ಚಾದಾಗ ಪ್ರಭೆಯೊಳಗೆ ಪ್ರಭೆಯಾಯಿತು
ಪ್ರಭೆಯ ಪ್ರಖರ ಕಡಿಮೆಯಾದಾಗ ದುಂಬಿಗಳು ಮಾಯ.....
ಎಣ್ಣೆ ಆರಿದೆ.....
ಮೊದಲೇ ಗೊತ್ತಾಗುತ್ತಿದ್ದರೆ ಎಣ್ಣೆ ಹಾಕುತ್ತಿದ್ದೆ....
ಈ ಗೊತ್ತಾಗದಿರುವುದೇ..... ಬದುಕು...
ಅಬ್ಬಾ..... ಅದರ ತಾಕತ್ತೇ.....!?
ಆರುವ ಮೊದಲು ಪ್ರಕಾಶದ ಪ್ರಭೆ
ಕತ್ತಲು ಸರಿದ ಅನುಭವ
ರಾಚುವ ಖುಷಿಗಳ ಮಾಲೆ
ಸಾಧಿಸಿದ ಗತ್ತು-ಗೈರತ್ತು....
ಬೀರಿದ ಪ್ರಭೆಗೆ ಮೊಗೆಮೊಗೆವ ರಿಂಗಣ
ರಿಂಗಿಸಿದಷ್ಟೂ ಬಾಚಿಕೊಳ್ಳುವ ಅವಕಾಶಗಳು
ಕರಬುವಷ್ಟು... ಗೊಣಗಾಡುವಷ್ಟು... ಹೊಟ್ಟೆಯೊಳಗಿನ ಹುಳ ಸಾಯುವಷ್ಟು..
ವಕ್ರನೋಟಿಗಳಿಗಿದು ಕೊನೆಯ ಅಸ್ತ್ರ
ಪ್ರಭೆಯಾರುವ ಮುನ್ನ ಸುತ್ತುವ ದುಂಬಿಗಳು
ಪ್ರಭೆಯ ಸ್ನೇಹ ಪಡೆದ ಹಪಾಹಪಿ
ಅಂತರ ಹೆಚ್ಚಾದಾಗ ಪ್ರಭೆಯೊಳಗೆ ಪ್ರಭೆಯಾಯಿತು
ಪ್ರಭೆಯ ಪ್ರಖರ ಕಡಿಮೆಯಾದಾಗ ದುಂಬಿಗಳು ಮಾಯ.....
Subscribe to:
Posts (Atom)







