Tuesday, October 19, 2010

'ಹಾರಕ' ಲೇಖನಕ್ಕೆ ಪ್ರಥಮ ಪುರಸ್ಕಾರ

ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ 'ಉಳಿಸಬೇಕಿದೆ ಈ ಕಿರುಧಾನ್ಯ - ಹಾರಕ' ಬರೆಹವು ಮಿಲ್ಲೆಟ್ ನೆಟ್ವರ್ಕ್ ಆಪ್ ಇಂಡಿಯಾ (ಮಿನಿ) ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ಜುಲೈ 21, 2010ರಂದು ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಈ ಬರೆಹ ಪ್ರಕಟವಾಗಿತ್ತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ನೇತೃತ್ವದಲ್ಲಿ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ನಮ್ಮ ಕೃಷಿರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲ; ಆಹಾರ ಮತ್ತು ಮೇವಿನ ಭದ್ರತೆ ಕಲ್ಪಿಸಬಲ್ಲ, ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ; ಆರೋಗ್ಯಕ್ಕೆ ಪೂರಕವಾಗಿರುವ ಸಾವಿ, ನವಣೆ, ಸಜ್ಜೆ, ಆರ್ಕ, ಉದಲು, ಕೊರ್ಲೆ, ಬರಗ ಮೊದಲಾದ ಧಾನ್ಯಗಳಿಗೆ ಒರಟು ಧಾನ್ಯಗಳೆಂಬ ಹಣೆಪಟ್ಟಿ ಕಟ್ಟಿ ಇವನ್ನು ದೇಶದ ಆಹಾರ ಧಾನ್ಯಗಳ ಅಗ್ರಪಂಕ್ತಿಯಲ್ಲಿ ಪೂರ್ಣ ಕಡೆಗಣಿಸಲಾಗಿದೆ. 'ಮಿನಿ' ಅವುಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮಾಧ್ಯಮವೂ ಈ ಕಾರ್ಯದಲ್ಲಿ ಕೈಜೋಡಿಸಬೇಕೆನ್ನವ 'ಮಿನಿ' ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದೆ.

ಬಹುಮಾನವು ಐದು ಸಾವಿರ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪುರಸ್ಕಾರ ಪ್ರದಾನ ಸಮಾರಂಭವು ಅಕ್ಟೋಬರ್ 31, 2010ರಂದು ಬೆಳಿಗ್ಗೆ 10 ಗಂಟೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆಯುವ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ನಡೆಯಲಿದೆ.

Sunday, July 4, 2010

ಪ್ರಶಸ್ತಿ ಪಡೆದಾಗ...

ಕೇಂದ್ರ ರೈಲ್ವೇ ಸಚಿವ ಮುನಿಯಪ್ಪನವರಿಂದ 'ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ' ಪಡೆದಾಗಿನ ಸಂದರ್ಭ
(27 ಜೂನ್ 2010, ಅರಮನೆ ಮೈದಾನ, ಬೆಂಗಳೂರು. ಸಂದರ್ಭ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನ)

Tuesday, June 22, 2010

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ನೀಡುವ 2008ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆಂದು ತಿಳಿಸಲು ಹರ್ಷವಾಗುತ್ತಿದೆ. ಗ್ರಾಮೀಣ ವರದಿಗಾರಿಕೆ ವಿಭಾಗದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಸಾಪ್ತಾಹಿಕದಲ್ಲಿ (17-8-2008) ಪ್ರಕಟವಾದ ನನ್ನ 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಜರಗುವ ಪತ್ರಕರ್ತರ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೊಪ್ಪದ 'ಸಹಕಾರಿ ಸಾರಿಗೆ'ಯು ಒಂದು ಸಂಘಟನಾತ್ಮಕ ಸಂಸ್ಥೆ. ಕಾರ್ಮಿಕರೇ ಇಲ್ಲಿ ಧನಿಗಳು. ಹಳ್ಳಿ ಮತ್ತು ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿದ, ಅನುಭವಿಸಿ ಅನುಭವವಿದ್ದ ಸಹಕಾರಿ ಸಾರಿಗೆಯ ಎಲ್ಲಾ ಸದಸ್ಯರ ಒಗ್ಗಟ್ಟಿನ ಫಲವಾಗಿ ಕೊಪ್ಪದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯಾಗಿ ಸುತ್ತುಮುತ್ತಲ ಹಳ್ಳಿಗಳು ಮತ್ತು ಕೃಷಿ ಅಭಿವೃದ್ದಿಯಾದುವು. ಇದರಿಂದಾಗಿ ಕೃಷಿ ಮತ್ತು ಗ್ರಾಮೀಣ ಬದುಕಿನಲ್ಲಿ ಹೊಸ ಬೆಳಕು ಮೂಡಿದ ತಾಜಾ ಚಿತ್ರಣವನ್ನು 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು ಬೆಳಕು ಚೆಲ್ಲಿತ್ತು.

Tuesday, May 25, 2010

ಪ್ರತಿಮಾ - ಮದುವೆಯ ಸಡಗರ

ಕೂಡ್ಲು ಕ್ರಷ್ಣ ಮಯ್ಯರ ಚತುರ್ಥ ಪುತ್ರಿ ಪ್ರತಿಮಾ ಮತ್ತು ಕಿದೂರು ಮೂಲದ, ಸದ್ಯ ತ್ರಿಶೂರಿನಲ್ಲಿರುವ ಸುಧೀರ್ - ಇವರ ವಿವಾಹ ಸಮಾರಂಭ ಮೇ ೨೧, ೨೦೧೦ರಂದು ಹೊಸಂಗಡಿ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿತು. ಮರುದಿವಸ ಕಿದೂರು ವರನ ಮನೆಯಲ್ಲಿ ನೂತನ ವಧೂವರರ ಗ್ರಹಪ್ರವೇಶ ಸಮಾರಂಭ ನಡೆಯಿತು. ಮೇ ೨೩ರಂದು ಕೂಡ್ಲು ವಧುವಿನ ಮನೆಯಲ್ಲಿ ’ಸಮ್ಮಾನ. ಆ ದಿವಸ ನಡೆಯಿತು - ಸತ್ಯನಾರಾಯಣ ಪೂಜೆ.

Thursday, April 8, 2010

ನೆನಪು-ಆಸಕ್ತಿ ಮರುಕಳಿಸಿದಾಗ

ನೆನಪು-ಆಸಕ್ತಿ ಮರುಕಳಿಸಿದಾಗ - ಮಾರ್ಚ್ 27, 2010ರಂದು ಕೊಡೆಂಕಿರಿಯಲ್ಲಿ 'ಭೀಷ್ಮವಿಜಯ'
(ಭೀಷ್ಮ: ಗುಂಡ್ಯಡ್ಕ ಈಶ್ವರ ಭಟ್, ಅಂಬೆ : ನಾ.ಕಾ, ಪರಶುರಾಮ : ದಿವಾಣ ಶಿವಶಂಕರ ಭಟ್, ಸಾಲ್ವ : ಉಂಡೆಮನೆ ಕೃಷ್ಣ ಭಟ್, ಬ್ರಾಹ್ಮಣ : ಪೆರುವೋಡಿ ಸುಬ್ಬಣ್ಣ ಭಟ್, ಏಕಲವ್ಯ : ವೆಂಕಟೇಶ ಮಯ್ಯ
ಹಿಮ್ಮೇಳ : ಭಾಗವತರು : ಸತ್ಯನಾರಾಯಣ ಪುಣಿಂಚಿತ್ತಾಯ,
ಚೆಂಡೆ-ಮದ್ದಳೆ : ಜಗನ್ನಿವಾಸ ರಾವ್ ಪಿ.ಜಿ., ಚಂದ್ರಶೇಖರ ಕೊಂಕಣಾಜೆ)

Wednesday, April 7, 2010

ಭತ್ತ ಉತ್ಸವದಲ್ಲಿ ನಾ. ಕಾರಂತ ಪೆರಾಜೆಯವರಿಗೆ ಪುರಸ್ಕಾರ


ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಇವರನ್ನು ದೇಸಿ ಭತ್ತದ ಬೀಜ ಹಾಗೂ ಸಂಸ್ಕ್ಕೃತಿಯನ್ನು ಉಳಿಸಿ ಬೆಳೆಸುವ ವಿಚಾರಗಳನ್ನು ಮಾಧ್ಯಮಗಳಲ್ಲಿ ಬೆಳಕು ಬೀರಿರುವ ಶ್ರಮವನ್ನು ಶ್ಲಾಘಿಸಿ ಬೆಂಗಳೂರಿನಲ್ಲಿ ಜರುಗಿದ 'ಭತ್ತ ಉತ್ಸವದಲ್ಲಿ ಗೌರವಿಸಲಾಯಿತು.

ರಾಜ್ಯ ಸರಕಾರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಹರತಾಳು ಹಾಲಪ್ಪ ಇವರ ಉಪಸ್ಥಿತಿಯಲ್ಲಿ ಮಾಜಿ ಸಚಿವೆ ಕು: ಶೋಭಾ ಕರಂದ್ಲಾಜೆಯವರು ಸ್ಮರಣಿಕೆ, ಪುರಸ್ಕಾರ ಕಥನ ಫಲಕವನ್ನು ನೀಡಿ ಗೌರವಿಸಿದರು.

ಎಲೆ ಮರೆಯ ಕಾಯಿಯಂತಿದ್ದ ಅನೇಕ ಸಾವಯವ ಕೃಷಿಕರು ಮತ್ತು ಬೀಜಸಂರಕ್ಷರನ್ನು ಮುಖ್ಯವಾಹಿನಿಗೆ ಪರಿಚಯಿಸಿದ ನಾ. ಕಾರಂತರೂ ಸೇರಿದಂತೆ ರಾಜ್ಯದ ಏಳು ಮಂದಿ ಕೃಷಿ ಮತ್ತು ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ಬೆಂಗಳೂರಿನ 'ಸಹಜ ಸಮೃದ್ಧ', 'ಭತ್ತ ಉಳಿಸಿ ಆಂದೋಳನ', ತಮಿಳುನಾಡಿದ 'ತನೆಲ್' ಮತ್ತು 'ಯೋರಾ' ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೇಶಕ ಜಿ.ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.

Sunday, February 7, 2010

ಬುಕ್ ಟಾಕ್

ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ 'ಕಾಡು ಮಾವು' ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ.

ಈ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರೆಹಗಳ ಸಂಕಲನವೇ - ಕಾಡು ಮಾವು.

’ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ’ ಮುನ್ನುಡಿಯಲ್ಲಿ ಶಿವರಾಂ ಪೈಲೂರು. ಪುತ್ತೂರಿನ ಕೊಡೆಂಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ.

(ಫೆ. 6, 2010 - ವಿಜಯಕರ್ನಾಟಕದ 'ಮೀಡಿಯಾ ಮಿರ್ಚಿ ಅಂಕಣದಲ್ಲಿ ಜಿ.ಎನ್.ಮೋಹನ್ ಅವರು ಪುಸ್ತಕದ ಕುರಿತು ಬರೆದ ಒಳ್ಳೆಯ ಮಾತು. ಮೋಹನ್ ಅವರಿಗೆ ಕೃತಜ್ಞತೆಗಳು)